 |
| THE BIGG BULL |
1980 ರಲ್ಲಿ Bombay stock exchange ನಲ್ಲಿ ಕಾಲಿಟ್ಟು ಮುಂದಿನ 10 ವರ್ಷಗಳಲ್ಲಿ ಮಾಮೂಲಿ ಉದ್ಯೋಗಿ ಇಂದ ಹಿಡಿದು ಷೇರು ಮಾರುಕಟ್ಟೆಯ ಬಿಗ್ ಬುಲ್ ಆಗಿ 15 square feet ಬಂಗಲೆ ಲಕ್ಸೂರಿ ಕಾರುಗಳು ಐಷಾರಾಮಿ ಆಫೀಸ್ ಇವೆಲ್ಲದರ ಮಾಲಿಕರಾಗಿ ಬೆಳೆದು ಹಾಗೆ ಎಷ್ಟು ವೇಗವಾಗಿ ಎತ್ತರಕ್ಕೆ ಏರಿದನು ಹಾಗೆ ಅಷ್ಟೇ ವೇಗವಾಗಿ ಆತನ ಸಾಮ್ರಾಜ್ಯ ಕುಸಿದಿತ್ತು ಹಾಗಾದರೆ ಈ ವ್ಯಕ್ತಿ ಯಾರೆಂಬುದರ ಬಗ್ಗೆ ನಿಮಗೆ ಎಷ್ಟು ಗೊತ್ತು?
Harshad Metha ಜೀವನ ಚರಿತ್ರೆ :
1973 ರ ರಾಯಪುರದಲ್ಲಿ 18 ವರ್ಷದ ಹರ್ಷದ್ ತೀವ್ರ ಹತಾಶಗೊಂಡಿದ್ದರು. ಅವರ ತಂದೆಯ ಆರೋಗ್ಯ ಮತ್ತು ವ್ಯಾಪಾರ ಎರಡು ಸಹ ಹದಗೆಟ್ಟಿತ್ತು ಹರ್ಷದ್ ಈ ಒಂದು ಪರಿಸ್ಥಿತಿಯನ್ನು ಬದಲಾಯಿಸಲು ಬಯಸಿದ್ದರು ಆದ್ದರಿಂದ ತಮ್ಮ ಅದೃಷ್ಟವನ್ನು ಮುಂಬೈ ಮಹಾನಗರಿಯಕ್ಕೆ ಹೊರಟಿದ್ದರು, ಕನಸುಗಳ ನಗರ ಮುಂಬೈನ ಲಾಲ್ ಲಜಪತ್ ರಾಯ್ ಕಾಲೇಜಿನಲ್ಲಿ ಅಡ್ಮಿಷನ್ ಸಿಕ್ಕಿತ್ತು ಕಾಲೇಜಿಗೆ ಹೋಗುವ ಜೊತೆಯಲ್ಲಿ ಅವರು ಚಿಕ್ಕ ಪುಟ್ಟ ಕೆಲಸಗಳನ್ನು ಸಹ ಮಾಡುತ್ತಿದ್ದರು. ಪ್ಲಾಸ್ಟಿಕ್ ಮತ್ತು ಸ್ಕ್ರಾಪ್ ಕಲೆಕ್ಟ್ ಮಾಡಿ ಮಾರುವುದರಿಂದ ಹಿಡಿದು ಸಿಮೆಂಟ್ ವ್ಯಾಪಾರದವರೆಗೂ ಹಲವಾರು ಕೆಲಸಗಳನ್ನು ಮಾಡುತ್ತಿದ್ದರು. 1972ರಲ್ಲಿ ಕಾಲೇಜ್ ಮುಗಿದ ನಂತರ ನ್ಯೂ ಇಂಡಿಯನ್ ಅಸುರೆನ್ಸ್ ಕಂಪನಿಯಲ್ಲಿ 600 ಸಂಬಳಕ್ಕೆ ಕ್ಲರ್ಕ್ ಆಗಿ ಸೇರಿಕೊಂಡರು. ನಂತರ ತನ್ನ ಇಡೀ ಫ್ಯಾಮಿಲಿಯನ್ನು ರಾಯಪುರದಿಂದ ಮುಂಬೈಗೆ ಕರೆಸಿಕೊಂಡಿದ್ದರು ತನ್ನ ಸಹೋದರ ಅಶ್ವಿನ್ ಮೆಹತಾಗೆ ಐಸಿಐಸಿಐ ಬ್ಯಾಂಕ್ ನಲ್ಲಿ ಕೆಲಸ ಕೊಡಿಸಿದ್ದರು, ಕೆಲಸದ ಜೊತೆಯಲ್ಲಿ ಇಬ್ಬರೂ ಸಹ ಸೈಡ್ ಬಿಸಿನೆಸ್ ಅನ್ನು ಮಾಡುತ್ತಿದ್ದರು ಆದರೆ ಮುಂದಿನ ಎರಡು ವರ್ಷಗಳಲ್ಲಿ ಅನೇಕ ವ್ಯವಹಾರಗಳನ್ನು ಮಾಡಲು ಪ್ರಯತ್ನ ಪಟ್ಟರು ಕೂಡ ಅವರು ದೊಡ್ಡದಾಗಿ ಬೆಳೆಯುವುದಕ್ಕೆ ಸಾಧ್ಯವಾಗಲಿಲ್ಲ.
ಎಂಟ್ರಿ ಫಾರ್ share market:
ಒಂದು ದಿನ ಷೇರು ಮಾರುಕಟ್ಟೆಯಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷೆ ಮಾಡಲು ನಿರ್ಧರಿಸಿದ್ದರು, ಈ ಒಂದು ಸಮಯದಲ್ಲಿ ಬಿಎಸ್ಸಿಯಲ್ಲಿ ಟ್ರೇಡಿಂಗ್ ರಿಂಗ್ ಇತ್ತು, ಎಲೆಕ್ಟ್ರಾನಿಕ್ ಟ್ರೇಡಿಂಗ್ ಇರಲಿಲ್ಲ ಸ್ವಯಂ ಶೇರುಗಳನ್ನ ಖರೀದಿ ಮಾಡಬೇಕಿತ್ತು ಮತ್ತು ಮಾರಬೇಕಿತ್ತು ಈ ಟ್ರೇಡಿಂಗ್ ರಿಂಗ್ಅನ್ನು ಪ್ರವೇಶ ಮಾಡುವುದಕ್ಕೆ ಉದ್ಯೋಗಿಗಳು ಮತ್ತು ದಲ್ಲಾಳಿಗಳಿಗೆ ಮಾತ್ರ ಪ್ರವೇಶವಿತ್ತು ಉದ್ಯೋಗಿಗಳ ಪಾತ್ರ ತನ್ನ ಗ್ರಾಹಕರಿಗಾಗಿ ಶೇರುಗಳನ್ನು ಖರೀದಿಸುವುದು ಮತ್ತು ಮಾರಾಟ ಮಾಡುವುದಾಗಿತ್ತು ಅಲ್ಲಿ ಟ್ರೇಡಿಂಗ್ ನಡೆಯುತ್ತಿರುವುದನ್ನು ಕಂಡು ಹರ್ಷದ್ ಮೆಹತಾರವರು ತಾನು ಸಹ ಈರಿಂಗೆ ಎಂಟ್ರಿಕೊಟ್ಟು ಡೀಲ್ಗಳನ್ನು ಮಾಡಬೇಕೆಂದು ನಿರ್ಧರಿಸಿದ್ದರು. ಆದರೆ ಇದಕ್ಕಾಗಿ ಅವನು ಉದ್ಯೋಗಿಯಾಗುವುದು ಅನಿವಾರ್ಯವಾಗಿತ್ತು ಅದಕ್ಕಾಗಿ ಇವರು ಪಿ ಅಂಬಾಲಾಲ್ ಎಂಬ ಬ್ರೋಕರ್ ಬಳಿ ಹೋಗಿ ತನ್ನನ್ನು ಉದ್ಯೋಗಿಯಾಗಿ ಸೇರಿಸಿಕೊಳ್ಳಲು ವಿನಂತಿಸಿಕೊಂಡರು, ಸಾಕಷ್ಟು ಪ್ರಯತ್ನದ ಬಳಿಕ ಅವರಿಗೆ ಜಾಬರ್ ಬ್ಯಾಡ್ಜ್ ಸಿಕ್ಕಿತು ಆದರೆ ಉದ್ಯೋಗಿಯಾದ ಅವರ ಮೊದಲನೇ ದಿನ ತುಂಬಾ ಕೆಟ್ಟದಾಗಿತ್ತು ಆಗಿನ ಕಾಲದಲ್ಲಿ ಒಂದೇ ಸಲ ಸುಮಾರು 2000 ಲಾಸ್ ಆಯ್ತು ಆದರೆ ಇದರಿಂದ ಹೊರ ದುಃಖ ಪಡದೆ ಇದನ್ನು ಒಂದು ಪಾಠವಾಗಿ ಸ್ವೀಕರಿಸಿದರು. ಮುಂದಿನ ಕೆಲವೇ ತಿಂಗಳ ಬಳಿಯವರು ತಮ್ಮ ಕೌಶಲ್ಯಗಳ ಮೂಲಕ ಮಾರುಕಟ್ಟೆಯಲ್ಲಿ ತ್ವರಿತವಾಗಿ ಅತ್ಯಂತ ಎಕ್ಸ್ಪರ್ಟ್ ಉದ್ಯೋಗಿಯಾದರು. ಆದರೆ ಆಗಿನ ಕಾಲದಲ್ಲಿ ಸ್ಟಾಕ್ ಮಾರ್ಕೆಟ್ನಲ್ಲಿ ಹೆಚ್ಚಿನ ಲಾಭಗಳಿಸುವದಕ್ಕೆ ಕಂಪನಿಯ ಬಗ್ಗೆ ಅನೇಕ ಮಾಹಿತಿಯ ಅಗತ್ಯವಿರುತ್ತಿತ್ತು ಇದು ಬೇರೆಯವರಿಗಿಂತ ಮೊದಲು ತಮಗೆ ತಿಳಿಯಬೇಕೆಂದು ಹರ್ಷದ್ ಮೆಹತಾ ರವರು ಯೋಚಿಸಿದ್ದರು ಕಂಪನಿಯ ಆಂತರಿಕ ಮಾಹಿತಿಯನ್ನು ಕೊಡಬಹುದಾದ ಜನರೊಂದಿಗೆ ಸಂಪರ್ಕವನ್ನು ಬೆಳೆಸುವುದಕ್ಕೆ ಶುರು ಮಾಡಿದರು ಜೊತೆಗೆ ಕಾರ್ಮಿಕ ಒಕ್ಕೂಟ ನಾಯಕರೊಂದಿಗೆ ಸಂಪರ್ಕ ಸಾಧಿಸಿದ್ದರು ಅವರಿಂದ ಕಂಪನಿಯ ಪ್ರೊಡಕ್ಷನ್ ಡೇಟಾವನ್ನು ಪಡೆಯುತ್ತಿದ್ದರು.
Share buying and trading: ಉತ್ಪಾದನೆ ಹೆಚ್ಚಾದ ಸಮಯದಲ್ಲಿ ಕಂಪನಿಯ ಶೇರುಗಳನ್ನು ಖರೀದಿಸಬಹುದು ಮತ್ತು ಕಡಿಮೆಯಾದಂತಹ ಸಂದರ್ಭದಲ್ಲಿ ಮತ್ತು ಕಾರ್ಮಿಕರ ಮುಷ್ಕರ ಶುರುವಾಗುವಂತಹ ಸಮಯವಿದ್ದರೆ ಮಾರುವಂತ ಯೋಜನೆ ಹಾಕಿಕೊಂಡು ಇದರಲ್ಲಿ ಸಾಕಷ್ಟು ಯಶಸ್ವಿಯಾದರು. ಇದನ್ನು ಆ ಸಮಯದಲ್ಲಿ ಇಂಟರ್ನಲ್ ಟ್ರೇಡಿಂಗ್ ಎಂದು ಕರೆಯುತ್ತಿದ್ದರು, ಪ್ರಸ್ತುತ ಇದು ಕಾನೂನುಬಾಹಿರವಾಗಿದೆ ಆದರೆ ಆಗಿನ ಕಾಲದಲ್ಲಿ ಇದು ಕಾನೂನು ಬದ್ಧವಾಗಿತ್ತು. ನಂತರ ಉದ್ಯೋಗಿಯಾದಂತಹ ಇವರಿಗೆ ಇತರರಿಗೆ ಟ್ರೇಡಿಂಗ್ ಮಾಡುವುದು ಅಲ್ಲದೆ ತನ್ನ ಸ್ವಂತ ಹಣವನ್ನು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದಕ್ಕೆ ಶುರು ಮಾಡಿದರು. 1982ರ ಹೊತ್ತಿಗೆ ಇಂಟರ್ನಲ್ ಟ್ರೇಡಿಂಗ್ ಆಧಾರದ ಮೇಲೆ ಸಾಕಷ್ಟು ಹಣವನ್ನು ಗಳಿಸಿದ್ದರು ನಂತರ ಅವರು ದೊಡ್ಡ ಮನೆಗೆ ಶಿಫ್ಟ್ ಆದರು. ಇದರಲ್ಲೇ ಅವರು ಸಾಕಷ್ಟು ಮಟ್ಟಿನ ಹಣವನ್ನು ಗಳಿಸಿದ್ದರು ಮುಂದೆ ಅವರು ತಮ್ಮ ದಾರಿ ಬದಲಾಯಿಸುವ ನಿರ್ಧಾರವನ್ನು ಮಾಡುತ್ತಾರೆ.
ನಂತರ ಇಂಟರ್ನಲ್ ಟ್ರೇಡಿಂಗ್ ಹೊರತಾಗಿ pump ಅಂಡ್ dump ಎಂಬ ಇನ್ನೊಂದು ತಂತ್ರವನ್ನು ಬಳಸಲು ನಿರ್ಧರಿಸುತ್ತಾರೆ ಇದರಲ್ಲಿ ಹೆಚ್ಚು ಖರೀದಿ ಮತ್ತು ಮಾರಾಟವಾಗದ ಅಂತಹ ಸ್ಟಾಕ್ ಗಳನ್ನು ಗುರುತಿಸಿ ತಾನು ಮತ್ತು ತಮ್ಮ ಸ್ನೇಹಿತರ ಜೊತೆ ಭಾರಿ ಪ್ರಮಾಣದಲ್ಲಿ ಖರೀದಿ ಮಾಡುತ್ತಿದ್ದರು ಆಗ ಆ ಷೇರುಗಳು ಮಾರುಕಟ್ಟೆಯಲ್ಲಿ ಕಡಿಮೆ ಪ್ರಮಾಣದಲ್ಲಿ ಇರುತ್ತಿದ್ದವು ಆದರೆ ಬೇಡಿಕೆ ಹೆಚ್ಚಾಗುತ್ತಿತ್ತು ಈ ರೀತಿಯಾದಾಗ ಹರ್ಷತ್ ತಮ್ಮಲ್ಲಿರುವ ಶೇರುಗಳನ್ನ ಇಷ್ಟಿಷ್ಟೇ ಪ್ರಮಾಣದಲ್ಲಿ ಮಾರಾಟ ಮಾಡಿ ಸಾಕಷ್ಟು ಹಣವನ್ನು ಸಂಪಾದಿಸುತ್ತಿದ್ದರು. ಹರ್ಷತ್ ತಮ್ಮ ತಮ್ಮ ಈ ಹೊಸ ತಂತ್ರಗಳಿಂದಾಗಿ ಸಾಕಷ್ಟು ಹಣವನ್ನು ಸಂಪಾದಿಸುತ್ತಿದ್ದರು ಈಗ ಮಾರುಕಟ್ಟೆಯಲ್ಲಿ ಅವನನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲವೆಂಬಷ್ಟು ಮಟ್ಟಿಗೆ ಅವರು ಬೆಳೆದಿದ್ದರು. ಆದರೆ ಎಷ್ಟೇ ಎತ್ತರ ಬೆಳೆದರು ಸಂಭವಿಸಬಾರದು ಸಂಭವಿಸಿತ್ತು ಅದು ಹರ್ಷದ್ ಮೆಹತಾರವರನ್ನು ಸಂಪೂರ್ಣವಾಗಿ ಹಾಳುಮಾಡಿತ್ತು.
BLACK THURSDAY :
1982 ಮಾರ್ಚ್ 18 ರಂದು ಸ್ಟಾಕ್ ಮಾರುಕಟ್ಟೆ ಎಂದಿನಂತೆ ಶುರುವಾಗಿತ್ತು ಆದರೆ ನಂತರ ಎರಡು ಗಂಟೆ ಮಾರುಕಟ್ಟೆ ವೇಗವಾಗಿ ಕುಸಿಯಲು ಶುರುವಾಯಿತು ಭಾರಿ ಕುಸಿತವನ್ನು ನೋಡಿ ಎಲ್ಲರೂ ಭಯಗೊಂಡು ತಮ್ಮ ಷೇರುಗಳನ್ನು ಮಾರಲು ಶುರು ಮಾಡಿದರು ಅದು ಎಷ್ಟರಮಟ್ಟಿಗೆ ಇತ್ತೆಂದರೆ ಕೇವಲ 15 ನಿಮಿಷದಲ್ಲಿ ಮಾರುಕಟ್ಟೆ ಅತ್ಯಂತ ಶತವೇಗದ ಕುಸಿತವನ್ನು ಕಂಡಿತು. 10 ಲಕ್ಷದ ನಷ್ಟದೊಂದಿಗೆ ಹರ್ಷದ್ ಬಹುತೇಕ ಬರ್ಬರಾಗಿದ್ದರು ಬ್ರೋಕರ್ಗಳ ದುಡ್ಡುಗಳನ್ನು ಮರುಪಾವಹಿಸಲು ಅವರು ತಮ್ಮ ಹೆಂಡತಿಯ ಒಡವೆಗಳನ್ನು ಅಡವಿಡಬೇಕಾದ ಪರಿಸ್ಥಿತಿ ಬಂದಿತು. ಮುಂದಿನ ಕೆಲ ತಿಂಗಳುಗಳ ಕಾಲ ಬ್ಯೂಟಿಷಿಯನ್ ಆಗಿದ್ದಂತಹ ಅಶ್ವಿನ್ ರವರ ಪತ್ನಿ ಮನೆ ನಡಿಸಬೇಕಾದ ಪರಿಸ್ಥಿತಿ ಬಂದಿತು. ಮುಂದೆ 1982 ಜೂನ್ ನಲ್ಲಿ ಹರ್ಷದ್ ಮತ್ತು ಅಶ್ವಿನ್ ಶೇರು ಮಾರುಕಟ್ಟೆಗೆ ಮರು ಪ್ರವೇಶವನ್ನು ಮಾಡಿದರು ಈ ಬಾರಿ ಅವರು ತಮ್ಮದೇ ಆದ ಸ್ಟಾಕ್ಸ್ ಟ್ರೇಡಿಂಗ್ ಸಂಸ್ಥೆಯನ್ನು ತೆರೆಯುವುದು ಮತ್ತು ಜನಗಳಿಗೆ ಸಲಹೆಗಳನ್ನು ಕೊಡುವಂತಹ ಯೋಜನೆಗಳನ್ನು ಹಾಕಿಕೊಂಡರು.
GROWMORE COMPANY INSTALLATION:
Grow more ಉದ್ದೇಶ ಶ್ರೀಮಂತ ಜನರಿಗೆ ಪೋರ್ಟ್ಪೋಲಿಯ ನಿರ್ವಹಣೆ ಸೇವೆಯನ್ನು ಒದಗಿಸುವುದು ಮತ್ತು ಅವರ ಹೆಚ್ಚುವರಿ ಹಣವನ್ನು ಮಾರಿಕಟ್ಟೆಯಲ್ಲಿ ಹೂಡಿಕೆಮಾಡಿ ಹೆಚ್ಚಿನ ರಿಟರ್ನ್ಸ್ ತಂದುಕೊಡುವುದು ಆಗಿತ್ತು. ಅಶ್ವಿನ್ ಅವರ ಮಾವ ಅವರಿಗೆ ನಾಲ್ಕು ಲಕ್ಷ ರೂಪಾಯಿಯನ್ನು ಕೊಟ್ಟಿದ್ದರು ಮತ್ತು ಇನ್ನು ಓರ್ವ ಸಿಎ ಅವರಿಗೆ ಒಂದು ಲಕ್ಷ ರೂಪಾಯಿಯನ್ನು ಕೊಟ್ಟಿದ್ದರು ಇದರಿಂದಲೇ ಈ ಗ್ರೋ ಮೋರ್ನ ವ್ಯವಹಾರ ಪ್ರಾರಂಭವಾಯಿತು. ಮಾರುಕಟ್ಟೆಯಲ್ಲಿ ಚಹಾ ಎಲೆಗಳ ದರ ಕೇಜಿಗೆ ಮೂರರಿಂದ ನಾಲ್ಕು ರೂಪಾಯಿ ಹೆಚ್ಚಾಗಿರುವುದನ್ನು ಹರ್ಷದ್ ಗಮನಿಸುತ್ತಾರೆ ಇದರ ಅರ್ಥ ಎಲೆಗಳನ್ನು ಮಾರಾಟ ಮಾಡುವ ಕಂಪನಿಗಳು ಸಾಮಾನ್ಯಕ್ಕಿಂತ ಹೆಚ್ಚು ಲಾಭವನ್ನು ಗಳಿಸುತ್ತವೆ ಎಂದು ಅವರಿಗೆ ತಿಳಿಯಿತು ಆದರೆ ಚಹಾ ಎಲೆಗಳ ಕಂಪನಿಗಳ ಷೇರುಗಳು ಸಾಕಷ್ಟು ಕಡಿಮೆ ಮೌಲ್ಯವನ್ನು ಹೊಂದಿದ್ದವು ಆಗ ಹರ್ಷದ್ ತನ್ನ ಗ್ರಾಹಕರಿಗಾಗಿ ಟಾಟಾ ಟೀ ಮತ್ತು ಹ್ಯಾರಿಸ್ ಮಲಿಯಾಂಡಂ ನಂತಹ ಕಂಪನಿಗಳ ಶೇರುಗಳನ್ನ ಹೆಚ್ಚು ಖರೀದಿಸಲು ಪ್ರಾರಂಭಿಸಿದ್ದರು, ವರ್ಷ ಕಳೆಯುವುದರಲ್ಲಿ ಈ ಕಂಪನಿಗಳ ಷೇರುಗಳು ವೇಗವಾಗಿ ಹೆಚ್ಚಾಗ ತೊಡಗಿದವು ಇದರಿಂದಾಗಿ ಹರ್ಷದ್ ಮತ್ತು ಗ್ರೋಮೊರ್ನ ಗ್ರಾಹಕರು ಹೆಚ್ಚಿನ ಹಣವನ್ನು ಗಳಿಸುತ್ತಾರೆ. ಹೈ ರಿಟರ್ನ್ಸ್ ಇಂದಾಗಿ ಈ ಗ್ರೂಮೊರ್ನ ಹೆಸರು ಎಲ್ಲಾ ಕಡೆ ವ್ಯಾಪಕವಾಗಲು ಪ್ರಾರಂಭಿಸಿತು ಗ್ರೋಮೊರ್ ನಲ್ಲಿ ಹೂಡಿಕೆ ಮಾಡಲು ಜನರು ಸಾಲುಗಟ್ಟಲೆ ನಿಲ್ಲುತ್ತಾರೆ. 1985ರ ಹೊತ್ತಿಗೆ ಹರ್ಷದ್ ಮೇಹತ ಷೇರು ಮಾರುಕಟ್ಟೆಯ ಮಾಂತ್ರಿಕ ಆಗಿದ್ದ ಆದರೆ ಇವರ ಈ ಯಶಸ್ಸನ್ನು ನೋಡಿ ಹಳೆಯ ಮಾರುಕಟ್ಟೆಯ ಕಿಂಗ್ ಒಬ್ಬರಿಗೆ ಅಸಮಾಧಾನವಾಗುತ್ತದೆ ಅವರೇ (ಮನು ಮಾಣಿಕ್) ಷೇರುಮಾರುಕಟ್ಟೆಯ ಭಾಷೆಯಲ್ಲಿ ಮನುಮಾಣಿಕ್ ಬಿಯರಾಗಿದ್ದರು ಇವರು ಶಾರ್ಪ್ ಟ್ರೇಡಿಂಗ್ ನ ಮೂಲಕ ಹಣವನ್ನುಗಳಿಸುತ್ತಿದ್ದರು. ಹರ್ಷದ್ ಮೆತಾರನ್ನು ತುಳಿಯಲು ಮನುಮಾಣಿಕ್ ಬಹಳ ದಿನಗಳಿಂದ ಪ್ರಯತ್ನಿಸುತ್ತಿದ್ದರು ಆ ಒಂದು ಅವಕಾಶ ಅವರಿಗೆ 1986ರಲ್ಲಿ ದೊರೆಯಿತು,
ಆಗಿನ ಹಣಕಾಸು ಸಚಿವರಾಗಿದಂತಹ ವಿಪಿ ಸಿಂಗ್ ಅವರು ಬಜೆಟ್ ನಲ್ಲಿ ಕೆಲವು ನಿರ್ಧಾರಗಳನ್ನು ತೆಗೆದುಕೊಂಡಿದ್ದರು ಅವು ಬಿಸಿನೆಸ್ಗಳಿಗೆ ಸರಿ ಹೊಂದುತ್ತಿರಲಿಲ್ಲ ಆಗ ಷೇರು ಮಾರುಕಟ್ಟೆ ಕುಸಿಯಲು ಪ್ರಾರಂಭವಾಯಿತು. ಹರ್ಷದ್ ಮೆಹತ SPIC ಎಂಬ ಹೆಸರಿನ ಷೇರುಗಳನ್ನು ಬಾರಿ ಪ್ರಮಾಣದಲ್ಲಿ ಖರೀದಿಸಿದ್ದರು ಅದರ ಬೆಲೆ ಅತ್ಯಂತ ವೇಗವಾಗಿ ಕುಸಿಯುತ್ತಿತ್ತು, ಆಗ ಮನುಮಾಣಿಕ್ ಮತ್ತು ಅವರ ತಂಡ SPIC ಷೇರುಗಳನ್ನು ಬಾರಿ ಪ್ರಮಾಣದಲ್ಲಿ ಮಾರಾಟ ಮಾಡಿದರು ಆಗ ಬೆಲೆ ಮತ್ತಷ್ಟು ಕುಸಿಯತೊಡಯಿತು ಆ ಒಂದು ಸಮಯದಲ್ಲಿ ಹರ್ಷತ್ ಸಾಲವನ್ನು ಪಡೆದು SPIC ಷೇರುಗಳಲ್ಲಿ ಹೂಡಿಕೆ ಮಾಡಿದ್ದರು ಹೀಗಾಗಿ ಹರ್ಷತ್ ಮೆಹತರವರಿಗೆ ಒಂದು ಕೋಟಿಗಿಂತ ಹೆಚ್ಚು ನಷ್ಟವಾಗಿದೆ ಎಂದು ಮಾಣಿಕ್ ಮತ್ತು ಅವರ ಗುಂಪು ಹಬ್ಬಿಸಿದ್ದರು, ಗ್ರೋಮೋರ್ ಸಂಸ್ಥೆ ಮಾರುಕಟ್ಟೆಯಲ್ಲಿ ದಿವಾಳಿಯಾಗಲಿದೆ ಎಂದು ಹಬ್ಬಿಸಿದರು. ಆದರೆ ವಾಸ್ತವವಾಗಿ ಅವಾಗ ಹರ್ಷತ್ ಬಳಿ ಕಂಬ್ಯಾಕ್ ಮಾಡಲು ಸಾಕಷ್ಟು ಹಣವಿತ್ತು ಆಗ ಹರ್ಷತ್ ತನ್ನ ಮತ್ತು ಗ್ರೋಮೋರ್ ನ ರೆಪಿಟೇಶನ್ ಉಳಿಸುವುದಕ್ಕೆ ಏನಾದರೂ ಮಾಡುವುದು ಅನಿವಾರ್ಯವಾಗಿತ್ತು ಬಾಕಿ ಹಣವನ್ನು ಪಾವತಿಸಲು ಕೇವಲ 14 ದಿನಗಳ ಕಾಲ ಕಾಲಾವಕಾಶವಿತ್ತು ಆದರೆ ಆ ವದಂತೆಗೆ ಇವರು ಕೌಂಟರ್ ಅನ್ನು ಕೊಡುವುದಕ್ಕೆ ಕಾಲಾವಕಾಶದ ಮುಂಚೆಯೇ ಹಣವನ್ನು ಪಾವತಿ ಮಾಡಿದ್ದರು ಈ ವಿಷಯವನ್ನು ಇವರು ಟೀ ಸ್ಟಾಲ್ ನಿಂದ ಹಿಡಿದು ಟ್ರೇಡಿಂಗ್ ವರೆಗೂ ಎಲ್ಲಾ ಕಡೆಯೂ ತಲುಪುವಂತೆ ಪ್ರಚಾರ ಮಾಡಿದ್ದರು. ಇದರಿಂದ ಇವರ ಖ್ಯಾತಿ ಮತ್ತಷ್ಟು ಹೆಚ್ಚಿತು ಆಗ ಈ ಮನುಮಾಣಿಕ್ ತಂಡಕ್ಕೆ ಆಘಾತವಾಗಿತ್ತು ಆದರೆ ಈ ಘಟನೆಯಲ್ಲಿ ಹರ್ಷತ್ರವರಿಗೆ ಸುಮಾರು ಒಂದುವರೆ ಕೋಟಿ ನಷ್ಟವಾಗಿತ್ತು. ಈ ಗ್ರೋ ಮೋರ್ ಸಣ್ಣ ಹೂಡಿಕೆದಾರರು ಮತ್ತು ಇನ್ಸ್ಟಿಟ್ಯೂಷನ್ ಇನ್ವೆಸ್ಟರ್ಸ್ ಗೆ ಹೂಡಿಕೆ ಮಾಡಲು ಕೆಲಸ ಮಾಡುತ್ತಿತ್ತು ಶೀಘ್ರದಲ್ಲೇ ಈ ಗ್ರೋ ಮೋರ್ ಭಾರತದ ಇನ್ಸ್ಟ್ಯೂಷನ್ಗಳಲ್ಲಿ ಒಂದಾಯಿತು.
ಇತರರ ಹಣವನ್ನು ಹೂಡಿಕೆ ಮಾಡುವ ಬದಲು ಅವರಿಗೆ ತಮ್ಮ ಸ್ವಂತ ಹಣವನ್ನೇ ಹೂಡಿಕೆ ಮಾಡುವ ಆಸಕ್ತಿಯನ್ನು ಹೊಂದಿದ್ದರು ಹಣ ಮತ್ತು ಲಾಭ ಎರಡು ತಮ್ಮದೇ ಆಗಬೇಕೆಂದು ಬಯಸಿದ್ದರು ಆದರೆ ಇದಕ್ಕಾಗಿ ಅವರು ನೂರಾರು ಕೋಟಿಯ ಮೌಲ್ಯದ ಹಣವನ್ನು ಬಂಡವಾಳವಾಗಿ ಹಾಕಬೇಕಿತ್ತು ಆದರೆ ಇಷ್ಟೊಂದು ಹಣ ಅವರ ಬಳಿ ಇರಲಿಲ್ಲ ಇದಕ್ಕಾಗಿ ಹರ್ಷತ್ ರವರು ಹೊಸ ಮಾರುಕಟ್ಟೆಯನ್ನೆ ಪ್ರವೇಶ ಮಾಡಿದರು ಅದೇ THE MONEY MARKET ಇದು ಬ್ಯಾಂಕ್ ನಿಂದ ಬ್ಯಾಂಕಿಗೆ ಸಾಲ ಕೊಡುವ ಪ್ರಕ್ರಿಯೆಯಾಗಿದೆ ಇದರ ಸಾಲದ ಮರುಪಾವತಿಯ ಕಾಲಾವಧಿ ಕೇವಲ 15 ದಿನಗಳು ಮಾತ್ರ ಇದರಿಂದ ಅವರು ಬಡ್ಡಿಯ ರೂಪದಲ್ಲಿ ಹೆಚ್ಚುವರಿ ಹಣವನ್ನುಗಳಿಸಬಹುದಿತ್ತು, ಈ ಸಾಲವನ್ನು ಬ್ಯಾಂಕ್ ಗಳು ಎಮರ್ಜೆನ್ಸಿ ಸಂದರ್ಭದಲ್ಲಿ ತೆಗೆದುಕೊಳ್ಳುತ್ತವೆ. ಈ ಸಮಯದಲ್ಲಿ ಬ್ಯಾಂಕುಗಳು ತಮ್ಮ ಬಳಿ ಇರುವ ಆಸ್ತಿಗಳನ್ನು ಅಡವಿಡಬೇಕಿತ್ತು ಆದರೆ ಈ ದಾರಿಯನ್ನು ಸುಲಭ ಮತ್ತು ಸುಗಮಗೊಳಿಸಲು ಬಿಯರ್ ಗಳನ್ನು ಬಳಸಲು ಶುರು ಮಾಡಿದರು (BR= BNAK RECIPTS ) ಎರಡು ಬ್ಯಾಂಕುಗಳ ಈ ಸಂಪೂರ್ಣ ವಹಿವಾಟನ್ನು RFD (READY FOR DEAL) ಎಂದು ಕರೆಯಲಾಗುತ್ತದೆ. ಇದನ್ನು ಮನಿಮಾರ್ಕೆಟ್ ನ ಬ್ರೋಕರ್ ಗಳು ಮ್ಯಾನೇಜ್ ಮಾಡುತ್ತಿದ್ದರು ಯಾವ ಬ್ಯಾಂಕುಗಳಿಗೆ ಇದರ ಅಗತ್ಯ ಇದೆ ಎಂದು ಹುಡುಕಿ ಅದನ್ನು ಕೊಡಿಸಿ ಅದರಿಂದ ಇವರು ಕಮಿಷನ್ಅನ್ನು ಪಡೆಯುತ್ತಿದ್ದರು ಹರ್ಷತ್ ಮೆಹತಾ ಇದರ ಬ್ರೋಕರಾಗಲು ಬಯಸಿದ್ದರು ಆದರೆ ಅಲ್ಲಿ ಹೊಸಬರಿಗೆ ಅವಕಾಶವಿಲ್ಲದಿರುವುದರಿಂದ ಇವರಿಗೆ ಅವಕಾಶ ಸಿಗಲಿಲ್ಲ ಇದರಿಂದ ಹರ್ಷತ್ ಮೇಹತ ಅವರು ಈ ಮೊದಲೇ ಅಲ್ಲಿ ಕೆಲಸ ಮಾಡಿ ಅಸಮಾಧಾನ ಹೊಂದಿರುವವರನ್ನು ಸೇರಿಸಿ ತಮ್ಮದೇ ಆದ ಒಂದು ಹೊಸದಾದ ಕಾಟೇಲನ್ನು ರಚಿಸಿಕೊಂಡರು.
BANK OF AMERICA ಮತ್ತು ANZ GRINDLACE ಬ್ಯಾಂಕ್ಗಳನ್ನು ಹರ್ಷತ್ ಗುರುತಿಸಿದರು ಅವರಿಗೆ ತಮ್ಮ ಬ್ರೋಕಿಂಗ್ ಸೇವೆಗಳನ್ನು ಕೊಡಲು ಪ್ರಾರಂಭಿಸಿದರು ಕೇವಲ ಎರಡು ವರ್ಷದಲ್ಲಿ ಮನಿ ಮಾರ್ಕೆಟಿಂಗ್ ಒಬ್ಬ ಉತ್ತಮ ಟಾಪ್ ಬ್ರೋಕರ್ ಆಗಿ ಗುರುತಿಸಿಕೊಂಡರು ಮತ್ತು ಇದರಲ್ಲಿ ಸಾಕಷ್ಟು ಹಣವನ್ನುಗಳಿಸಿದ್ದರು. ಆದರೆ ಈ ಹರ್ಷತ್ರವರು ಮನಿ ಮಾರ್ಕೆಟ್ ನಲ್ಲಿ ಬ್ರೋಕರ್ ಆಗಿ ಹಣಗಳಿಸಲು ಬಂದಿರಲಿಲ್ಲ ಮನಿ ಮಾರ್ಕೆಟಿಂಗ್ ಅನ್ನು ಬಳಸಿಕೊಂಡು ಷೇರು ಮಾರ್ಕೆಟ್ನಲ್ಲಿ ಸಾವಿರಾರು ಕೋಟಿಗೊಳಿಸುವ ಯೋಜನೆ ಅವರದಾಗಿತ್ತು.
SCAM 1992 :
ಆದರೆ ಅವರ ಈ ಯೋಜನೆಯ ಮುಂದೆ ಭಾರತದ ಅತೀ ದೊಡ್ಡ ಹಣಕಾಸು ಒಗ್ಗರಣೆಯನ್ನು ಪಡೆಯಲ್ಲಿತ್ತು ಮೈ ಮಾರ್ಕೆಟ್ ನಲ್ಲಿ ಸಮಯವನ್ನು ಉಳಿಸಲು ಅನೇಕ ಬ್ಯಾಂಕ್ಗಳು ಮುಂಚಿತವಾಗಿಯೇ ಬ್ರೋಕರ್ ಗಳ ಖಾತೆಗೆ ಹಣವನ್ನು ವರ್ಗಾವಣೆ ಮಾಡುತ್ತಿದ್ದವು ಬ್ರೋಕರ್ಗಳಿಗೆ ಒಳ್ಳೆ ಡೀಲ್ ಸಿಕ್ಕಾಗ ಅವರು ಅವುಗಳನ್ನು ಅವಶ್ಯಕತೆ ಇರುವಂತಹ ಬ್ಯಾಂಕಗಳಿಗೆ ತಕ್ಷಣ ವರ್ಗಾಯಿಸಿ ಅವರಿಂದ ಬಿಆರ್ ಪಡೆದು ಸಾಲ ಕೊಟ್ಟಂತಹ ಬ್ಯಾಂಕ್ಗಳಿಗೆ ವರ್ಗಾಯಿಸಬೇಕಿತ್ತು ಹಾಗೆ ವರ್ಗಾವಣೆ ಮಾಡಿದಂತಹ ಹಣ ಕೆಲವೊಮ್ಮೆ 15 -20 ದಿನಗಳವರೆಗೆ ಬ್ರೋಕರ್ ಗಳ ಬಳಿಯೇ ಇರುತ್ತಿತ್ತು, ಇಲ್ಲಿನ ಈ ಲೂಫೋನ್ಸ್ ಕಂಡುಕೊಂಡಂತಹ ಹರ್ಷತ್ ಮೆಹತಾ ಬ್ಯಾಂಕುಗಳು ಅವನಿಗೆ ಹಣವನ್ನು ವರ್ಗಾಯಿಸಿದಾಗ ಆ ಹಣವನ್ನು ಶೇರು ಮಾರುಕಟ್ಟೆಯಲ್ಲಿ ಇವರು ಹೂಡಿಕೆ ಮಾಡಲು ಶುರು ಮಾಡಿದ್ದರು. ತನ್ನ ನೆಚ್ಚಿನ ಷೇರುಗಳ ಬೆಲೆಗಳನ್ನು ಕೃತಕವಾಗಿ ಹೆಚ್ಚಿಗೆ ಮಾಡಿ ಯಾವುದಾದರೂ ಬ್ಯಾಂಕುಗಳಿಗೆ ಸಾಲಬೇಕೆಂದಾಗ ಅವುಗಳನ್ನ ಮಾರಿ ಅವುಗಳಿಗೆ ಹಣ ಕೊಟ್ಟು ಅವುಗಳಿಂದ ಬಿಆರ್ ಪಡೆದು ಅವುಗಳನ್ನು ಮೂಲ ಬ್ಯಾಂಕ್ ಕೊಡುತ್ತಿದ್ದರು ಇಲ್ಲಿ ಷೇರು ಮಾರುಕಟ್ಟೆಯಲ್ಲಿ ಬಂದಂತಹ ಲಾಭ ಹಾಗೂ ಬ್ಯಾಂಕಿನಿಂದ ಬರುತ್ತಿದ್ದಂತಹ ಕಮಿಷನ್ ಹೀಗೆ ಎರಡೆರಡು ಕಡೆ ಆದಾಯವನ್ನು ಯಾರದೋ ದುಡ್ಡಿಂದ ಪಡೆಯುತ್ತಿದ್ದರು. ಇಷ್ಟಕ್ಕೂ ಸಮಾಧಾನವಾಗದಂತಹ ಅವರು ಈ ವ್ಯವಹಾರದಲ್ಲಿ ಮತ್ತೊಂದು ಲೂಪ್ ಹೋಲ್ ಅನ್ನು ಕಂಡುಕೊಂಡಿದ್ದರು ಅದೇನೆಂದರೆ ಸಾಲಕ್ಕೆ ಕೊಡುತ್ತಿದ್ದಂತಹ ಬಿಆರ್ಗಳನ್ನು ಯಾರು ಕ್ರಾಸ್ ಚೆಕ್ ಮಾಡುತ್ತಿರಲಿಲ್ಲ ಇದರ ಅರ್ಥ ಬಿಆರ್ ನಲ್ಲಿ ಹೇಳಿದ ಹಾಗೆ ಸೆಕ್ಯೂರಿಟೀಸ್ ಅಷ್ಟೊಂದು ಆಸ್ತಿ ನಿಜವಾಗಿಯೂ ಆ ಬ್ಯಾಂಕ್ಗಳ ಬಳಿ ಇದೆ ಎಂದು ಯಾರೂ ಸಹ ನೋಡುತ್ತಿರಲಿಲ್ಲ ಇದರ ಲಾಭವನ್ನು ಪಡೆಯಲು ಯೋಜನೆ ಮಾಡಿದಂತಹ ಹರ್ಷತ್ ಸಣ್ಣಪುಟ್ಟ ಬ್ಯಾಂಕ್ಗಳಿಗೆ ನೂರಾರು ಕೋಟಿ ರೂಪಾಯಿ ಕೊಟ್ಟಿದ್ದೇನೆ ಎಂದು ಆ ಬ್ಯಾಂಕ್ಗಳು ಹೇಳಿದ ಹಾಗೆ ಒಂದು ನಕಲಿ ಬಿ ಆರ್ ಅನ್ನು ಕೊಡುತ್ತಿದ್ದರು ಹೀಗಿರುವಾಗ ಅವರಿಗೆ ಮಾರುಕಟ್ಟೆಯಲ್ಲಿ ಷೇರುಗಳನ್ನು ಕೊಳ್ಳಲು ಮತ್ತು ಪೇರನ್ನು ಮಾರಲು ಹೆಚ್ಚು ಸಮಯ ಸಿಗುತ್ತಿತ್ತು ಹೀಗಾಗಿ ಅದರಿಂದ ಭರ್ಜರಿ ಲಾಭವನ್ನುಗಳಿಸಿದ್ದರು.ಇದರಿಂದ ಇವರಿಗೆ ಮಾರುಕಟ್ಟೆಯಲ್ಲಿ " THE BIG BULL" ಎಂಬ ಹೆಸರು ಸಹ ಬಂದಿತ್ತು. ಮಾರುಕಟ್ಟೆಯಲ್ಲಿ ಹರ್ಷತ್ ಮೈದಾರ್ ಅವರ ಪ್ರಭಾವ ಇಷ್ಟರಮಟ್ಟಿಗೆ ಇತ್ತು ಎಂದರೆ ಅವರು ಕೈ ಹಾಕಿದಂತಹ ಷೇರುಗಳ ಬೆಲೆ ದಿನ ಕಳೆಯುವುದರಲ್ಲಿ ಏರುತ್ತಿದ್ದವು ಆದ್ರೆ ಇವರ ಪ್ರಭಾವ ಎಷ್ಟು ಬೇಗ ಏರಿತ್ತು ಅಷ್ಟೇ ಬೇಗನೆ ಇಳಿಯಿತು.
1991ರಲ್ಲಿ ಮನಿ ಮಾರ್ಕೆಟ್ ನಲ್ಲಿ ನಕಲಿ ಬಿ ಆರ್ ಗಳು ಎಂಬ ಸುಳಿವು RBI ಕೈಗೆ ಸಿಕ್ಕಿತು ಅವುಗಳ ದುರುಪಯೋಗ ಆಗುತ್ತಿರುವುದು ಸಹ ಆರ್ಬಿಐಗೆ ಗೊತ್ತಾಯಿತು ಆಗ ಆರ್ ಬಿ ಐ ಕೆಲ ಬ್ಯಾಂಕಗಳ ತನಿಖೆಗೆ ಆದೇಶ ಹೊರಡಿಸಿತು ಜೊತೆಗೆ ಎಲ್ಲಾ ಬ್ಯಾಂಕ್ಗಳಿಗೆ ಬಿ ಆರ್ ಗೆ ಸಂಬಂಧಿಸಿದಂತೆ ಕಟ್ಟುನಿಟ್ಟಾದಂತಹ ಮಾರ್ಗಸೂಚಿಗಳನ್ನು ಸಹ ಕೊಟ್ಟಿತು, ಅಂದರೆ ನಕಲಿ ಬಿ ಆರ್ ಗಳನ್ನು ಬಳಸಿ ಮನಿ ಮಾರ್ಕೆಟ್ ನಲ್ಲಿ ಕಾರ್ಯನಿರ್ವಹಿಸುವುದು ತುಂಬಾ ಕಷ್ಟಕರವಾಗಿತ್ತು ಆದರೆ ಇದರ ನಂತರ ಹರ್ಷತ್ ಡಿಸೆಂಬರ್ 1991ರಲ್ಲಿ ಎಸ್ ಬಿ ಐ ನಿಂದ 500 ಕೋಟಿ ರೂಪಾಯಿಗಳನ್ನು ತೆಗೆದುಕೊಂಡಿದ್ದರು ಈ ಹಣವನ್ನು ಷೇರುಮಾರುಕಟ್ಟೆಯಲ್ಲಿ ಹಾಕಿದ್ದರು ಆದರೆ ಬೇರೆ ಬ್ಯಾಂಕ್ಗಳಿಂದ ಎಸ್ ಬಿ ಐ ಗೆ ನಕಲಿ ಬಿ ಆರ್ ಗಳನ್ನು ಕೊಡಲು ಸಾಧ್ಯವಾಗಲಿಲ್ಲ ಆಗ ಈ ಹರ್ಷತ್ ಎಸ್ ಬಿ ಐ ನ ಅಧಿಕಾರಿಯಾಗಿದ್ದ ಆರ್ ಸೀತಾರಾಮನ್ ಅವರಿಗೆ ಲಂಚ ಕೊಟ್ಟು ಈ ಬಿಆರ್ಗಳನ್ನು ಕೊಡದಂತಹ ಸಂಗತಿಗಳನ್ನು ಗೊತ್ತಾಗದಂತೆ ನೋಡಿಕೊಳ್ಳಲು ಹೇಳಿದ್ದರು ಕೆಲವು ದಿನ ಹಿರಿಯ ಅಧಿಕಾರಿಗಳಿಗೆ ಈ ಸ್ಕ್ಯಾಮ್ ಬಗ್ಗೆ ತಿಳಿದಿರಲಿಲ್ಲ ಆದರೆ ಈ ಸ್ಕ್ಯಾನ್ ತುಂಬಾ ದಿನ ಉಳಿಯಲಿಲ್ಲ.
ಏಪ್ರಿಲ್ 1992ರಲ್ಲಿ ಎಸ್ ಬಿಐನ ಅಧಿಕಾರಿಗಳು ತಮ್ಮ ದಾಖಲೆಗಳಲ್ಲಿ ಐನೂರು ಕೋಟಿ ರೂಪಾಯಿಗಳ ಅಂತರ ಪತ್ತೆಹಚ್ಚಿದರು ನಂತರ ಎಸ್ಬಿಐ ಹರ್ಷತ್ ರವರನ್ನು ಕರೆಸಿ ಹಣವನ್ನು ಹಿಂದಿರುಗಿಸಲು ಒತ್ತಾಯಿಸುತ್ತಾರೆ ಆದರೆ ವರ್ಷಕ್ಕೆ ಈ ಒಂದು ಹಣದ ಅಗತ್ಯ ತುಂಬಾ ಇತ್ತು ಶೇರು ಮಾರುಕಟ್ಟೆಯನ್ನು ಎತ್ತರವಾಗಿ ನೋಡಿಕೊಳ್ಳಲು ಆ ಹಣ ಬೇಕಿತ್ತು, ಹಾಗಾಗಿ ಆ ಹಣವನ್ನು ಕೊಡಲು ಆಗಲಿಲ್ಲ ಹರ್ಷತ್ ಮೆಹತ ಅವರ ತಮ್ಮ ಕೆಲವೊಂದು ಷೇರುಗಳನ್ನು ಮಾರಿ ಆ ಹಣವನ್ನು ಹಿಂದಿರುಗಿಸಲು ಹೇಳುತ್ತಾನೆ ಆದರೆ ಹರ್ಷತ್ ಇದನ್ನು ಒಪ್ಪುವುದಿಲ್ಲ ಹಣ ಕೊಡದಿದ್ದರೆ ಎಸ್ಬಿಐ ಕಾನೂನು ಕ್ರಮವನ್ನು ಕೈಗೊಳ್ಳುತ್ತಿತ್ತು ಇದರಿಂದ ಅವರ ಎಲ್ಲಾ ಹಗರಣ ಹೊರಬರುವಂತಿತ್ತು ಇದರಿಂದ ಎಸ್ ಬಿ ಐ ಬಳಿ ಸ್ವಲ್ಪ ಕಾಲಾವಕಾಶವನ್ನು ಕೇಳಿದ್ದರು ನಂತರ NHB ಎಂಬ ಬ್ಯಾಂಕಿನಿಂದ ಹಣವನ್ನು ಪಡೆದು ಎಸ್ ಬಿ ಐ ಗೆ ಕಂತುಗಳ ರೂಪದಲ್ಲಿ ತುಂಬುವುದಕ್ಕೆ ಶುರು ಮಾಡಿದರು ಆದರೆ ಅಷ್ಟೊತ್ತಿಗಾಗಲೇ 1992 ಏಪ್ರಿಲ್ 23 ಸುಮಾರು 500 ಕೋಟಿ ರೂಪಾಯಿ ಎಸ್ಬಿಐ ಖಾತೆಯಿಂದ ಮಿಸ್ ಆಗಿದೆ ಇದಕ್ಕೆಲ್ಲ ಕಾರಣ ಬಿಗ್ ಬುಲ್ ಹರ್ಷತ್ ಮೆಹತ TIME OF INDIA ಮತ್ತು ಇನ್ನುಳಿದ ಪತ್ರಿಕೆಯಲ್ಲಿ ಸುದ್ದಿಯನ್ನು ಪ್ರಕಟಿಸಿದರು, ಈ ಒಂದು ವರದಿ ಸಂಸತ್ತಿನಲ್ಲೂ ಸಹ ಗದ್ದಲವನ್ನು ಎಬ್ಬಿಸಿತು ವಿರೋಧಪಕ್ಷಗಳು ಸರ್ಕಾರದ ವಿರುದ್ಧ ಧ್ವನಿಯನ್ನು ಎತ್ತಿದರು ಗಾಬರಿಯಾದಂತ ಸರ್ಕಾರ ಹರ್ಷತ್ ಮೇಲೆ ಆದಾಯ ತೆರಿಗೆ ಸಿಬಿಐ ತನಿಕೆಗೆ ಆದೇಶ ಹೊರಡಿಸಿತು ಮನಿ ಮಾರ್ಕೆಟ್ ಮತ್ತು ಹಣದ ಹಗರಣ ಒಂದೊಂದಾಗಿ ಬೆಳಕಿಗೆ ಬರಲು ಶುರುವಾಯಿತು ಹರ್ಷತ್ ರನ್ನು ಸೇರಿದಂತೆ BANK OF KARAD ಮತ್ತು COOPERATIVE BANK ಗಳು ಸಹ ಮುಳುಗಿ ಹೋದವು ಈ ಸಂಪೂರ್ಣ ಅಗರಣದ ಗಾತ್ರ ಸುಮಾರು ನಾಲ್ಕು ಸಾವಿರ ಕೋಟಿ. 1992 ಜೂನ್ 4 ರಂದು ಹರ್ಷತ್ ಮೆಹತಾ ಮತ್ತು ಅವರ ತಮ್ಮ ಅಶ್ವಿನ್ ಮೆಹತಾರನ್ನು ಬಂಧಿಸಲಾಯಿತು ಅವರ ಆಸ್ತಿ,ಮನೆ,ಬ್ಯಾಂಕುಗಳು ಮತ್ತು ಕಾರುಗಳನ್ನು ಸಹ ಮುಟ್ಟುಗೋಲು ಹಾಕಿಕೊಳ್ಳಲಾಯಿತು.
" ತುಂಬಾ ಜನ ಹರ್ಷತ್ ಮೆಹತಾರನ್ನು ಒಬ್ಬ ಫ್ರಾಡ್ ಎಂದು ಕರೆದರೆ ಮತ್ತು ತುಂಬಾ ಜನ ಆತ ಬುದ್ಧಿವಂತ ವ್ಯಕ್ತಿ ಎಂದು ಕರೆಯುತ್ತಾರೆ". ಇವರ ಬಗ್ಗೆ ನಿಮ್ಮ ಅಭಿಪ್ರಾಯವೇನು?